`ರಣ` ವೇಗದ ಚಿತ್ರೀಕರಣ
Posted date: 12 Wed, Oct 2011 ? 12:11:37 PM

ಮೊದಲ ಬಾರಿಗೆ ಹೆಸರಾಂತ ನಿರ್ದೇಶಕ ಎಸ್. ನಾರಾಯಣ್ ಅವರ ಪುತ್ರ ಪಂಕಜ್ ಹೊರಗಿನ ಬ್ಯಾನರ್‌ನಲ್ಲಿ ಅಭಿನಯಿಸುತ್ತಿರುವ ’ರಣ’ ಬಿರುಸಿನ ಚಿತ್ರೀಕರಣ ಮುಗಿಸಿ ತಮಿಳುನಾಡಿನ ಒಂದು ಪ್ರದೇಶದಲ್ಲಿ ಚಿತ್ರೀಕರಣವನ್ನು ಮಾಡಿ ಈ ತಿಂಗಳ ೧೦ರಿಂದ ೨ನೇ ಹಂತದ ಚಿತ್ರೀಕರಣವನ್ನು ಮುಗಿಸಿ ಜನವರಿ ೨೦೧೨ರ ಹೊತ್ತಿಗೆ ತೆರೆಯ ಮೇಲೆ ಬರುವ ಆಶಯವನ್ನು ನಿರ್ದೇಶಕ ಶ್ರೀನಿವಾಸ ಮೂರ್ತಿ ವ್ಯಕ್ತ ಮಾಡಿದ್ದಾರೆ. ಹೆಸರಾಂತ ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದಿರುವ ಇವರು ಈ ಚಿತ್ರದಲ್ಲಿ ಸ್ವತಂತ್ರವಾಗಿ ನಿರ್ದೇಶನ ಮಾಡುತ್ತಾ ಹೊಸ ವಿಚಾರವನ್ನು ಪ್ರೇಕ್ಷಕರ ಮುಂದಿಟ್ಟು ಅವರು ಸ್ವಗತದಲ್ಲಿ ತೊಡಗುವಂತೆ ಮಾಡುತ್ತೇನೆ ಎನ್ನುತ್ತಾರೆ.

ನಾಯಕ ನಟ ಪಂಕಜ್ ಜೊತೆಯಾಗಿ ಸುಪ್ರೀತಾ, ಅರ್ಚನಾ ಹಾಗೂ ಸೋನಿಯಾ ಗೌಡ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಹೆಸರಾಂತ ನಟಿಯೊಬ್ಬರ ಆಗಮನವೂ ಇದೆ ಎನ್ನುತ್ತಾರೆ ನಿರ್ದೇಶಕರು. ಈ ಚಿತ್ರಕ್ಕೆ ರಾಜರತ್ನಂ ಛಾಯಾಗ್ರಹಣವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed